Skip to content
ಸೋಲಿಗಿಂತ ಮಾನವೀಯತೆ ಮುಖ್ಯ
-
By
NIMMA KANNADATI
- September 22, 2024
- Comments
- Less than a minute
- 181 Views
- 9 months ago
ಸೋಲಿಗಿಂತ ಮಾನವೀಯತೆ ಮುಖ್ಯ.
ಒಂದು ಊರಿನಲ್ಲಿ ಒಬ್ಬ ಸನ್ಯಾಸಿ ವಾಸ ಮಾಡುತಿದ್ದ. ಯಾರೊಡನೆಯೂ ಹೆಚ್ಚು ಮಾತನಾಡದೆ ಸರಳವಾಗಿ ಜೀವಿಸುತ್ತಿದ್ದ. ಆತ ತನ್ನ ಬಳಿಗೆ ಬಂದವರ ಸಮಸ್ಯೆಗಳನ್ನು ಆಲಿಸಿ ಪರಿಹಾರಗಳನ್ನು ಸೂಚಿಸುತ್ತಿದ್ದ. ಹಾಗಾಗಿ ಆತನನ್ನು ಊರಿನ ಜನ ಬಹಳ ಗೌರವದಿಂದ ಕಾಣುತ್ತಿದ್ದರು.
ಆಗಾಗ ಭವಿಷ್ಯದ ವಿಚಾರಗಳನ್ನು ಹೇಳುವುದರಲ್ಲಿ ಆತ ಪ್ರಸಿದ್ದಿ ಪಡೆದಿದ್ದ. ಅವು ನಿಜಾಗುತ್ತಿದ್ದವು. ಅದರಿಂದ ಜನರಿಗೆ ಆತನ ಭವಿಷ್ಯವಾಣಿಯ ಮೇಲೆ ಬಹಳ ವಿಷಯಾಸವಿತ್ತು.
ಆ ಊರಿನಲ್ಲಿದ್ದ ಒಬ್ಬ ಯುವಕ ಈ ಸನ್ಯಾಸಿ ಭವಿಷ್ಯ ನುಡಿಯುವುದೆಲ್ಲ ಬೂಟಾಟಿಕೆ ಆತನಿಗೆ ವರ್ತಮಾನವನ್ನೇ ಗ್ರಹಿಸಲಾಗದು. ಭವಿಷ್ಯವೇನು ನುಡಿಯಬಲ್ಲ. ಎಂದು ಅಪಹಾಸ್ಯ ಮಾಡಿ ತಿರುಗಾಡುತ್ತಿದ್ದ. ಆತನ ಈ ವಿಚಾರವನ್ನು ಸನ್ಯಾಸಿಗೆ ತಿಳಿದಾಗ ಸನ್ಯಾಸಿ ನಕ್ಕು ಸುಮ್ಮನಾದ. ಆದರೆ ಯುವಕನಿಗೆ ದಿನದಿಂದ ದಿನಕ್ಕೆ ಸನ್ಯಾಸಿಯ ಜನಪ್ರಿಯತೆ ಮೇಲೆ ಮತ್ಸರ ಹೆಚ್ಚಾಯಿತು. ಸನ್ಯಾಸಿ ಹೇಳುವುದನ್ನು ಹೇಗಾದರೂ ಮಾಡಿ ಒಮ್ಮೆಯಾದರೂ ಸುಳ್ಳೆಂದು ಸಾದಿಸಿ ತೋರಿಸಿದರೆ ಆಗ ಆತನ ಜನಪ್ರಿಯತೆಗೆ ದಕ್ಕೆ ಬರುತ್ತದೆ ಎಂದು ಸನ್ಯಾಸಿಯನ್ನು ಸೋಲಿಸಲು ಮಾರ್ಗೋಪಾಯ ಹುಡುಕ ತೊಡಗಿದ.
ಅದೊಂದು ದಿನ ಯುವಕ ತನ್ನ ಎರಡು ಕೈಗಳ ನಡುವೆ ಜೀವಂತ ಹಕ್ಕಿ ಮರಿಯೊಂದನ್ನು ಅಡಗಿಸಿಟ್ಟು ಬೆನ್ನ ಹಿಂದೆ ಕೈಗಳನ್ನು ಇಟ್ಟುಕೊಂಡು ಸನ್ಯಾಸಿಯ ಬಳಿ ಬಂದು ” ನೀವು ಭವಿಷ್ಯ ನುಡಿಯುತ್ತೀರಿ ಎನ್ನುತ್ತಾರಲ್ಲಾ ? ನನ್ನ ಕೈಯೊಳಗೊಂದು ಹಕ್ಕಿ ಮರಿ ಇದೆ. ಅದು ಬದುಕಿದೆಯೇ ಸತ್ತಿದೆಯೇ ಎಂಬುದನ್ನು ತಿಳಿಸಿ ಎಂದ. ಒಂದು ವೇಳೆ ಸನ್ಯಾಸಿ ಹಕ್ಕಿ ಮರಿ ಬದುಕಿದೆ ಎಂದರೆ ಹಕ್ಕಿಯನ್ನು ಮುಷ್ಟಿಯಲ್ಲೇ ಸಾಯಿಸಿ ಅದು ಸತ್ತಿದೆ ಎನ್ನುವುದು ಹಕ್ಕಿ ಸತ್ತಿದೆ ಎಂದು ಸನ್ಯಾಸಿ ಹೇಳಿದರೆ ಜೀವಂತ ಹಕ್ಕಿಯನ್ನು ತೋರಿಸುವುದು, ಆ ಮೂಲಕ ಸನ್ಯಾಸಿಯನ್ನು ಸೋಲಿಸುವುದು ಎಂದು ಆಲೋಚಿಸಿದ್ದ. ಸನ್ಯಾಸಿ ಯುವಕನ ಮಾತುಗಳನ್ನು ಕೇಳಿ ತಡಮಾಡದೆ ನಿನ್ನ ಕೈಳಲ್ಲಿರುವ ಹಕ್ಕಿ ಸತ್ತಿದೆ ಎಂದ. ಯುವಕ ಅಟ್ಟಹಾಸದಿಂದ ನಗುತ್ತ ಮುಸ್ಟಿಯನ್ನು ತೆರೆದ. ಅದುವರೆಗೆ ಮುಷ್ಠಿಯೊಳಗೆ ಉರಿರಾಡಲಾಗದೆ ಒದ್ದಾಡುತ್ತಿದ್ದ ಹಕ್ಕಿ ಮುಷ್ಟಿ ತೆರೆದದ್ದೇ ತಡ ಪುರ್ ಎಂದು ಹಾರಿ ಹೋಯಿತು.
ಸನ್ಯಾಸಿ ನಕ್ಕು ಯುವಕನಿಗೆ ಹೇಳಿದ. ” ಮಗು ಕಪಟಿ ನಾನಲ್ಲ ಕಪಟತನ ನಿನ್ನಲ್ಲೇ ಇತ್ತು. ಆ ಹಕ್ಕಿಯ ಬದುಕು ಮತ್ತು ಸಾವು ಎರಡೂ ನಿನ್ನ ಕೈಯೊಳಗೆ ಇದೆ ಎನ್ನುವುದು ನನಗೆ ಗೊತ್ತಿತ್ತು. ಆದರೂ ನಾನೇಕೆ ಅದು ಸತ್ತಿದೆ ಎಂದೇ ಎನ್ನುವುದು ಗೊತ್ತೇ? ಹಾಗೆ ಹೇಳಿದರೆ ನೀನು ಹಕ್ಕಿಯನ್ನು ಜೀವಂತ ಉಳಿಸುತ್ತೀ ಎಂಬುದು ನನಗೆ ತಿಳಿದಿತ್ತು. ಹಕ್ಕಿ ಉಳಿಯುವುದು ನನಗೆ ಬೇಕಿತ್ತು. ನನ್ನ ಗೆಲುವು ಅಥವಾ ಸೋಲಿಗಾಗಿ ನಿಷ್ಪಾಪಿ ಹಕ್ಕಿ ಬಲಿಯಾಗುವುದು ನನಗೆ ಬೇಕಿಲ್ಲ. ಮಾನವೀಯತೆಯ ಗೆಲುವಿಗೆ ಕಾರಣವಾಗುವ ಇಂತಹ ಸಾವಿರ ಸೋಲುಗಳನ್ನು ನನ್ನ ಹೆಮ್ಮೆಯಿಂದ ಸ್ವೀಕರಿಸುತ್ತೇನೆ ಎಂದ.
ಯುವಕ ಸನ್ಯಾಸಿಯ ಮಾತು ಕೇಳಿ ತಲೆಬಾಗಿ ವಂದಿಸಿ ತನ್ನ ತಪ್ಪನ್ನು ಒಪ್ಪಿ ಕ್ಷಮೆ ಕೇಳಿದ. ನಿಜ ಬದುಕಿನಲ್ಲಿ ಮಾನವೀಯತೆಗಿಂತ ಮಿಗಿಲಾದುದು ಯಾವುದು ಇಲ್ಲ. ಸೋಲು ಮಾನವೀಯತೆಗಿಂತ ದೊಡ್ಡದಲ್ಲ. ಬೇರೆಯವರ ಸೋಲುಗಳಲ್ಲಿ ನಮ್ಮ ಗೆಲುವನ್ನು ಯಾವತ್ತೂ ನೋಡಬಾರದು. ಬೇರೆಯವರನ್ನು ಸೋಲಿಸಲು ಕಪಟತನಕ್ಕೆ ಇಳಿಯಲೂ ಬರಡು. ಆತ್ಮ ತೃಪ್ತಿಯ ಗೆಲುವು ಮಾತ್ರ ನಿಜವಾದುದು.