ಓಂ ಪಿಸಾಸಾತ್ ವಾಜಾಯ ವಿದ್ಮಹೇ! ಶೂಲ ಹಸ್ತಾಯ
ಧೀಮಹಿ ! ತನ್ನೋ ಕಾಳಿ ಪ್ರಚೋದಯಾತ್ !!
ಗಣಪತಿ ಹಾಗು ದೇವಿ ಪೂಜೆಗೆ ದಾಸವಾಳ ಶ್ರೇಷ್ಠ, ಗಾಢ ಬಣ್ಣದ ಆಕರ್ಷಕ ಹೂವುಗಳು ಪೂಜಾ ಮಂದಿರದ ಅಂದವನ್ನೇ ಹೆಚ್ಚಿಸುತ್ತದೆ. ವರ್ಷವಿಡೀ ಹೂಗಳನ್ನು ಬಿಡುತ್ತದೆ. ಬಿಳಿ ಹಾಗು ಕೆಂಪು ದಾಸವಾಳಗಳಲ್ಲಿ ಔಷದಿಯ ಗುಣಗಳಿವೆ. ಬೇರುಗಳಲ್ಲಿರುವ ಹಲವಾರು ಔಷಧೀಯ ಗುಣದ ಮಿಶ್ರಣಗಳನ್ನು ಕೆಮ್ಮಿನಂತಹ ಹಲವು ಕಾಯಿಲೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ಇತರ ಪದಾರ್ಥಗಳೊಂದಿಗೆ ಹೂವುಗಳನ್ನು ಎಣ್ಣೆಯಲ್ಲಿ ಕುದಿಸಿ ಔಷಧಯುಕ್ತ ತೈಲವನ್ನು ತಯಾರಿಸುತ್ತಾರೆ. ಇದರಿಂದ ತಯಾರಾದ ಮಿಶ್ರಣವನ್ನು ನರೆಗೂದಲು ಹಾಗು ಕೂದಲುದುರುವಿಕೆ ತಡೆಗಟ್ಟಲು ಬಳಸುತ್ತಾರೆ. ಕಂಡೀಶನರ್ ಆಗಿಯೂ ಬಳಕೆಯಾಗುತ್ತದೆ.
Leave feedback about this