STATE NEWS

The State News Page is your go-to source for the latest and most relevant news from your state. Covering a wide range of topics including politics, social issues, education, business, entertainment, and local events, this page keeps readers informed about what’s happening in their community. With up-to-date reports, in-depth analysis, and expert commentary, it highlights key developments, important decisions, and the stories that matter most to local residents. Whether you’re interested in state government updates, regional trends, or cultural happenings, the State News Page provides accurate and timely information to keep you connected to what’s shaping your state.

LATEST WITH HUB STATE NEWS

ಲಿವರ್ ದಾನದ ಬಳಿಕ ಉಪನ್ಯಾಸಕಿ ಸಾವು – ಇನ್ನೂ ಸ್ಪಷ್ಟವಾಗದ ಸಾವಿನ ಕಾರಣ ಕಸಿ ಮಾಡಿಸಿಕೊಂಡ ಮಹಿಳೆ ಚೇತರಿಕೆ.

ಲಿವರ್ ದಾನದ ಬಳಿಕ ಉಪನ್ಯಾಸಕಿ ಸಾವು. ಇನ್ನೂ ಸ್ಪಷ್ಟವಾಗದ ಸಾವಿನ ಕಾರಣ ಕಸಿ ಮಾಡಿಸಿಕೊಂಡ ಮಹಿಳೆ ಚೇತರಿಕೆ. ತನ್ನ ಪತಿಯ ಸಂಬಂಧಿಯೊಬ್ಬರಿಗೆ ಲಿವರ್ ನ್ನು ದಾನ ಮಾಡಿದ್ದ ಮಂಗಳೂರು ನಗರದ ಉಪನ್ಯಾಸಕಿ ಅರ್ಚನಾ ಕಾಮತ್ (33) ಅವರು ದಿಢೀರನೆ ಅಸ್ವಸ್ಥಗೊಂಡು ನಿಧನರಾಗಿದ್ದಾರೆ. ತನ್ನ ಪತಿಯ ಸಂಬಂಧಿಯೋರ್ವರಿಗೆ ಲಿವರ್ ಕಸಿ ಮಾಡಲಾಗಿತ್ತು. ಹಲವರನ್ನು ತಪಾಸಣೆಗೆ ಒಳಪಡಿಸಿದ್ದರೂ ಹೊಂದಾಣಿಕೆಯಾಗಿರಲಿಲ್ಲ. ಆದರೆ ಅರ್ಚನಾ ಅವರ ರಕ್ತದ ಗುಂಪು ಹೊಂದಾಣಿಕೆಯಾಗಿತ್ತು. ಹಾಗೂ ಅವರು ಲಿವರ್ ದಾನಕ್ಕೆ ಒಪ್ಪಿದ್ದರು. ಅದರಂತೆ 12 ದಿನಗಳ ಹಿಂದೆ

Read More
LATEST WITH HUB STATE NEWS

ಈದ್ ಮಿಲಾದ್ ಮೆರವಣಿಗೆಯಲ್ಲಿ ಗುಂಪು ಘರ್ಷಣೆ – ಮಾರಕಾಸ್ತ್ರಗಳಿಂದ ಹಲ್ಲೆ

ಕೋಲಾರ : ಈದ್ ಮಿಲಾದ್ ಮೆರವಣಿಗೆಯಲ್ಲಿ ಗುಂಪು ಘರ್ಷಣೆ ಉಂಟಾದ ಘಟನೆ ಸಪ್ಟೆಂಬರ್ 16 ರಂದು ನಡೆದಿದೆ. ಈ ಘಟನೆಯಲ್ಲಿ ಕ್ಷುಲ್ಲಕ ಕಾರಣದಿಂದಾಗಿ ಎರಡು ಗುಂಪುಗಳ ನಡುವೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆದಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಈ ಘಟನೆ ಕ್ಲಾಕ್ ಟವರ್ ಬಳಿ ಸಂಭವಿಸಿದ್ದು, ಸೈಯದ್ ಸಲ್ಮಾನ್, ಸೈಯದ್ ಸೈಫ್, ಹುಸೇನ್ ಕಾಷಿಪ್, ಹಾಗೂ ಖಲೀಲ್ ಅಹ್ಮದ್ ಹಲ್ಲೆಗೆ ಒಳಗಾದವರು. ಹಲ್ಲೆ ನಡೆಸಿದ ಗುಂಪನ್ನು ತಾಹೀರ್ ಹಾಗೂ ಸೈಯದ್ ವಸೀಂ ಪಾಷಾ ಎಂದು ಹೇಳಲಾಗುತ್ತಿದೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ

Read More
LATEST WITH HUB STATE NEWS

ಬೈಕ್ ಸರ್ವಿಸ್ ವಿಚಾರ – ಶೋರೂಂ ಗೆ ಬೆಂಕಿ ಇಟ್ಟ ಭೂಪ

ಕಲಬುರಗಿ : ಬೈಕನ್ನು ಸರಿಯಾಗಿ ಸರ್ವಿಸ್ ಮಾಡಿಲ್ಲ ಎಂಬ ಕಾರಣಕ್ಕೆ ಶೋ ರೂಂ ಗೆ ಬೆಂಕಿ ಇಟ್ಟ ಘಟನೆಯೊಂದು ಕಲಬುರಗಿಯಲ್ಲಿ ನಡೆದಿದೆ. ಇದನ್ನ ಮೊದಲು ಶಾರ್ಟ್ ಸರ್ಕ್ಯೂಟ್ ಎಂದು ಭಾವಿಸಿದ್ದರು ಆದರೆ ಪೊಲೀಸ್ ತನಿಖೆಯಿಂದ ಭೂಪನೊಬ್ಬ ಬೆಂಕಿ ಹಚ್ಚಿರುವ ವಿಷಯ ಬೆಳಕಿಗೆ ಬಂದಿದೆ. ಘಟನೆಯ ವಿವರ : ಮೂರು ವಾರಗಳ ಹಿಂದೆ ಮೊಹಮ್ಮದ್ ನದೀಮ್ ಎಂಬಾತ ಕಲಬುರುಗಿಯ ಹಮನಾಬಾದ್ ಶೋ ರೂಂ ನಿಂದ ಹೊಸ ಬೈಕನ್ನು ಖರೀದಿ ಮಾಡಿದ್ದಾರೆ. ಅದು ಪದೇ ಪದೇ ರಿಪೇರಿಗೆ ಬರುವುದನ್ನು ನೋಡಿ

Read More
LATEST WITH HUB LOCAL NEWS STATE NEWS

“ದಿ ರಾಮೇಶ್ವರಂ ಕೆಫೆ” ಬ್ಲಾಸ್ಟ್‌: ಭಯಾನಕ ಸಂಗತಿ ಬಿಚ್ಚಿಟ್ಟ NIA

ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ನಾಲ್ವರು ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ. ಈ ಸ್ಫೋಟವು 2024ರ ಮಾರ್ಚ್ 1ರಂದು ಬೆಂಗಳೂರು ನಗರದ ಬ್ರುಕ್‌ಫೀಲ್ಡ್ ಪ್ರದೇಶದ ರಾಮೇಶ್ವರಂ ಕೆಫೆಯಲ್ಲಿ ನಡೆದಿತ್ತು. ಈ ಸ್ಫೋಟದಿಂದ ಒಟ್ಟು ಒಂಬತ್ತು ಜನರು ಗಾಯಗೊಂಡು, ಹೋಟೆಲ್ ಆಸ್ತಿ ತೀವ್ರವಾಗಿ ಹಾನಿಗೊಳಗಾಯಿತು. ಈ ಪ್ರಕರಣದಲ್ಲಿ ಆರೋಪಿಗಳಾದ ಮುಸ್ಸವಿರ್ ಹುಸೈನ್ ಶಾಜಿಬ್, ಅಬ್ದುಲ್ ಮತೀನ್ ಅಹ್ಮದ್ ತಾಹಾ, ಮಾಝ್ ಮುನೀರ್ ಅಹ್ಮದ್, ಮತ್ತು ಮುಜಮ್ಮಿಲ್ ಶರೀಫ್ ಅವರ ವಿರುದ್ಧ ಭಾರತ ದಂಡ

Read More
LATEST WITH HUB STATE NEWS

“ಭಾರತದಲ್ಲಿ ಮಂಕಿಪಾಕ್ಸ್ ಪ್ರಕರಣ: ಕೋತಿಗಳಿಗೂ ಇದಕ್ಕೂ ಏನಾದರು ಸಂಬಂಧವಿದೆಯೇ ? – ಮಂಕಿಪಾಕ್ಸ್​ಗೆ ಚಿಕಿತ್ಸೆ ಮತ್ತು ತಡೆಗಟ್ಟುವಿಕೆ:

“ಭಾರತದಲ್ಲಿ ಮಂಕಿಪಾಕ್ಸ್ ಪ್ರಕರಣ: ಕೋತಿಗಳಿಗೂ ಇದಕ್ಕೂ ಏನಾದರು ಸಂಬಂಧವಿದೆಯೇ ? ಮಂಕಿಪಾಕ್ಸ್ (Mpox), ಫೆಬ್ರವರಿ 2023 ರಲ್ಲಿ WHO (ವಿಶ್ವ ಆರೋಗ್ಯ ಸಂಸ್ಥೆ) ಹೊಸ ಹೆಸರು ನೀಡಿದ್ದಾರೆ, ಇದು ಮೊದಲು Monkeypox ಎಂದು ಕರೆಯಲ್ಪಡುತ್ತಿತ್ತು. ಈ ವೈರಸ್‌ಬಾಧಿತ ಕಾಯಿಲೆ ಮೊದಲ ಬಾರಿ 2022 ರಲ್ಲಿ ಭಾರತದ ಕೆಲವು ಭಾಗಗಳಲ್ಲಿ ಕಂಡುಬಂದಿತು. ಇದರ ಬೆನ್ನಲ್ಲೇ ದೇಶದ ವಿವಿಧ ಪ್ರದೇಶಗಳಲ್ಲಿ ಕೆಲವು ಶಂಕಿತ ಪ್ರಕರಣಗಳು ವರದಿಯಾಗಿವೆ. ಮಂಕಿಪಾಕ್ಸ್ ಎಂದರೆ ಏನು ? ಮಂಕಿಪಾಕ್ಸ್ (Mpox) ಒಂದು ವೈರಸ್‌ನಿಂದ ಬರುವ ಕಾಯಿಲೆ

Read More
LATEST WITH HUB STATE NEWS

ಛತ್ತೀಸ್‌ಗಢದಲ್ಲಿ ಸಿಡಿಲು ಬಡಿದು ಏಳು ವ್ಯಕ್ತಿಗಳ ಸಾವು, ಮೂವರಿಗೆ ಗಾಯ

ಸೆಪ್ಟೆಂಬರ್ 7, 2024   ಛತ್ತೀಸ್‌ಗಢದ ಮೊಹ್ತಾರಾ ಗ್ರಾಮದಲ್ಲಿ ಭಾನುವಾರ ಸಂಜೆ ಭೀಕರ ಮಳೆಯ ಸಂದರ್ಭದಲ್ಲಿ ಸಿಡಿಲು ಬಡಿದ ಪರಿಣಾಮವಾಗಿ ಏಳು ಜನರು ಸಾವನ್ನಪ್ಪಿದ್ದು ಮೂವರು ಗಾಯಗೊಂಡಿದ್ದಾರೆ. ಸಾವಿಗೀಡಾದ ಏಳು ಜನರಲ್ಲಿ ಹೆಣ್ಣು-ಮಕ್ಕಳು ಮತ್ತು ಪುರುಷರು ಸೇರಿದ್ದಾರೆ. ಮೃತರೆಲ್ಲರೂ ಹೊಲದಲ್ಲಿ ಕೆಲಸ ಮಾಡುತ್ತಾ  ಇದ್ದಾಗ ಈ ಘಟನೆ ಸಂಭವಿಸಿದೆ. ಈ ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು  ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಕ್ಕಳ ಮತ್ತು ಮಹಿಳೆಯರಿಗೆ ವಿಶೇಷ ಜಾಗರೂಕತೆ ಹಾಗೂ ಸುರಕ್ಷಿತ ಸ್ಥಳಗಳಲ್ಲಿ ಇರಲು ಸೂಚನೆ ನೀಡಲಾಗಿದೆ.

Read More
LATEST WITH HUB STATE NEWS

ನಾಲ್ಕು ಕೊಲೆಗೈದ ನಿಜ್ಜಾರು ಆರೋಪಿಯಿಂದ ಜೈಲಿನಲ್ಲಿ ಉಪವಾಸ ಮುಷ್ಕರ

ಉಡುಪಿ: ಕಳೆದ ವರ್ಷದ ದೀಪಾವಳಿ ಸಮಯದಲ್ಲಿ ನೇಜಾರಿನ ಒಂದೇ ಕುಟುಂಬದ ನಾಲ್ವರು ಮಂದಿ ಧಾರುಣವಾಗಿ ಕೊಲೆಗೈದ ಪ್ರಕರಣದ ಆರೋಪಿ ಅರುಣ್ ಚೌಗಲೆ ಇದೀಗ ಜೈಲಿನಲ್ಲಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾನೆ. ಈ ಪ್ರಕರಣದಲ್ಲಿ ಆರೋಪಿಯಾಗಿ ಬಂಧಿತನಾದ ಅರುಣ್ ಈಗ ಜೈಲಿನಲ್ಲಿ ಉಪವಾಸ ಸತ್ಯಾಗ್ರಹವನ್ನು ಮಾಡಿ ತನ್ನ ಬೇಡಿಕೆಯನ್ನು ಮುಂದಿಟ್ಟಿದ್ದಾನೆ. ಆತನ ಬೇಡಿಕೆ ಏನೆಂದರೆ, ತನ್ನನ್ನು ಪ್ರತ್ಯೇಕ (ಒಂಟಿ) ಸೆಲ್‌ನಿಂದ ಜನರಲ್ ಸೆಲ್‌ಗೆ ವರ್ಗಾಯಿಸಬೇಕು ಎಂಬುದು. ನೆನ್ನೆಯಿಂದ, ಅರುಣ್ ಚೌಗಲೆ ನೀರು ಸಹ ಸೇವಿಸದೇ ಉಪವಾಸ ಶುರು ಮಾಡಿದ್ದಾನೆ. ಆತನು ಆಹಾರ

Read More
LATEST WITH HUB STATE NEWS

ದೇಶಾದ್ಯಂತ ಬ್ರಹತ್ ಪ್ರೊಟೆಸ್ಟ್ -ಅಭಿಯಾನ ಕೋಲ್ಕತ್ತಾ ವೈದ್ಯೆಗೆ ನ್ಯಾಯಕ್ಕಾಗಿ ಹೋರಾಟ

2024ರ ಆಗಸ್ಟ್ 9 ರಂದು ಕೋಲ್ಕತ್ತಾದ RG ಕಾರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 31 ವರ್ಷದ ತರಬೇತಿ ವೈದ್ಯೆಯ ಮೇಲಿನ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಇಂದು ಸುಪ್ರೀಂ ಕೋರ್ಟ್ ವಿಚಾರಣೆಗೆ ತೆಗೆದುಕೊಳ್ಳಲಿದೆ. ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳು ಜೆ.ಬಿ. ಪಾರ್ಡಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಈ ವಿಚಾರಣೆಯನ್ನು ನಿಭಾಯಿಸಲಿದೆ. ಭಾನುವಾರ ರಾತ್ರಿ ಕೋಲ್ಕತ್ತಾ ಮತ್ತು ವಿಶ್ವದಾದ್ಯಂತ ಸಾವಿರಾರು ಜನರು ಬಲಿಪಶುವಾದ ವೈದ್ಯೆಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಪ್ರತಿಭಟನೆಗೆ ಇಳಿದಿದ್ದಾರೆ.

Read More
LATEST WITH HUB STATE NEWS

ಮಂಗಳೂರಿನಲ್ಲಿ ಆಟೋ ಅಪಘಾತ: ಅತೀ ವೇಗವಾಗಿ ಬರುತ್ತಿದ್ದ ಆಟೋ  ಪಲ್ಟಿಯಾಗಿ ತಾಯಿಯ ಮೇಲೆ ಬಿದ್ದಾಗ, ಮಗಳು ಆಟೋ ಎತ್ತಿ ತಾಯಿಯನ್ನು ಉಳಿಸಿದ ಘಟನೆ ವೈರಲ್:

ಮಂಗಳೂರಿನಲ್ಲಿ ಆಟೋ ಅಪಘಾತ: ಅತೀ ವೇಗವಾಗಿ ಬರುತ್ತಿದ್ದ ಆಟೋ  ಪಲ್ಟಿಯಾಗಿ ತಾಯಿಯ ಮೇಲೆ ಬಿದ್ದಾಗ, ಮಗಳು ಆಟೋ ಎತ್ತಿ ತಾಯಿಯನ್ನು ಉಳಿಸಿದ ಘಟನೆ ವೈರಲ್: ಮಂಗಳೂರು: ಮಂಗಳೂರಿನ ಕಿನ್ನಿಗೋಳಿಯ ರಾಮನಗರದಲ್ಲಿ ನಡೆದಿರುವ ಅಪಘಾತದಲ್ಲಿ ಪುಟ್ಟ ಬಾಲಕಿಯೊಬ್ಬಳು ತನ್ನ ತಾಯಿಯ ಮೇಲೆ ಮಗುಚಿದ ಆಟೋವನ್ನು ಎತ್ತಿ ಹಾಕಿ, ತಾಯಿಯನ್ನು ರಕ್ಷಿಸಿರುವ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ. ಚೇತನಾ (35 ವರ್ಷ) ಎಂಬ ಮಹಿಳೆ ತನ್ನ ಮಗಳನ್ನು ಟ್ಯೂಶನ್ ಸೆಂಟರ್‌ನಲ್ಲಿ ಕರೆತರಲು ಬಂದಿದ್ದಾಗ. ಟ್ಯೂಶನ್ ಮುಗಿಸಿ ಮನೆಗೆ

Read More
LATEST WITH HUB STATE NEWS

ಭಾರತದಲ್ಲಿ ಮೊದಲ Mpox (Monkeypox) ಶಂಕಿತ ಪ್ರಕರಣ ಪತ್ತೆ: ಆತಂಕ ಪಡುವ ಅಗತ್ಯವಿಲ್ಲ:

ಭಾರತದಲ್ಲಿ ಮೊದಲ Mpox (Monkeypox) ಶಂಕಿತ ಪ್ರಕರಣ ಪತ್ತೆ: ಆತಂಕ ಪಡುವ ಅಗತ್ಯವಿಲ್ಲ  ಭಾರತದಲ್ಲಿ ಸೆಪ್ಟೆಂಬರ್ 8 ರಂದು ಮೊದಲ Mpox (Monkeypox) ಶಂಕಿತ ಪ್ರಕರಣ ವರದಿಯಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಟಣೆಯ ಪ್ರಕಾರ, ಇತ್ತೀಚೆಗೆ Mpox ಸಾಂಕ್ರಾಮಿಕತೆಯ ಪ್ರಭಾವದಲ್ಲಿರುವ ದೇಶದಿಂದ ಪ್ರಯಾಣಿಸಿ ಬಂದಿದ್ದ ಯುವನನ್ನು ಈ ಶಂಕಿತ ಪ್ರಕರಣವಾಗಿ ಗುರುತಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ: ಎಂಪಾಕ್ಸ್‌ ಒಂದು ಸ್ವಯಂ-ನಿಯಂತ್ರಿತ (Self-limiting) ರೋಗವಾಗಿದ್ದು, ಅದರ ಸಾವಿನ ಪ್ರಮಾಣವು ಹಲವು ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. WHO ನೀಡಿದ

Read More
X