ಬೆಂಗಳೂರು, ಅಕ್ಟೋಬರ್ 21: ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ರಜೋಲ್ಲಾ ಗ್ರಾಮದಲ್ಲಿ ದುರಂತ ಘಟನೆ ನಡೆದಿದೆ. 34 ವರ್ಷದ ವ್ಯಕ್ತಿ ತನ್ನ ತಾಯಿಯನ್ನು ಹತ್ಯೆ ಮಾಡಿದ್ದಾನೆ ಎಂದು ವರದಿಯಾಗಿದೆ, ಅವರು ತಮ್ಮ ತಾತ್ಕಾಲಿಕ ಪ್ರಯಾಣದಿಂದ ಮನೆಗೆ ಮರಳಿದ ನಂತರ ಈ ದುರಂತ ಸಂಭವಿಸಿದೆ.
ಮೃತರು 72 ವರ್ಷದ ದೇವಕ್ಕಮ್ಮ ದೊಡ್ಡಬೀರಪ್ಪ ಪೂಜಾರಿ ಆಗಿದ್ದು, ಅಕ್ಟೋಬರ್ 19 ರಂದು ಅವರ ಮನೆ ಬಳಿ ಮೃತ ಸ್ಥಿತಿಯಲ್ಲಿ ಕಂಡುಬಂದರು. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಅವರ ಮಗ, 34 ವರ್ಷದ ಜಟ್ಟಪ್ಪ ದೊಡ್ಡಬೀರಪ್ಪ ಪೂಜಾರಿ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಕಳೆದ ಒಂದು ವರ್ಷದಿಂದ ಜಟ್ಟಪ್ಪ ಅವರ ಪತ್ನಿ, ದಿನನಿತ್ಯದ ಗಲಾಟೆಗಳನ್ನು ಅನುಭವಿಸುತ್ತಿದ್ದ ಕಾರಣ, ತಾಯಿ ಮನೆಯಲ್ಲಿಯೇ ಇದ್ದರು. ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ತವರಿನಲ್ಲಿ ವಾಸವಾಗಿದ್ದರು. ಜಟ್ಟಪ್ಪ ಮದ್ಯಪಾನ ಮಾಡಿ ಮನೆಗೆ ಮರಳಿದಾಗ ಹಿಂಸೆಯನ್ನು ಅನುಭವಿಸುತ್ತಿದ್ದ ಅವರ ಪತ್ನಿ ದೂರವಾಗಿದ್ದರು.
ದೊಡ್ಡಬೀರಪ್ಪ ಪೂಜಾರಿ ಅವರು ಘಟನೆಗೆ 5 ದಿನಗಳ ಮುಂಚೆ ಲಕ್ಷ್ಮಿಪುರವಾಡಿ ಗ್ರಾಮಕ್ಕೆ ಹೋಗಿದ್ದರು. ಶನಿವಾರದಂದು (ಅಕ್ಟೋಬರ್ 19) ಅವರು ರಜೋಲ್ಲಾ ಗ್ರಾಮಕ್ಕೆ ಹಿಂದಿರುಗಿದಾಗ, ತಮ್ಮ ಮಗ ಜಟ್ಟಪ್ಪನೊಂದಿಗೆ ಗಲಾಟೆ ಶುರುವಾಗಿ ಜಟ್ಟಪ್ಪ, ತಾಯಿ ದೇವಕ್ಕಮ್ಮ ಅವರ ಮೇಲೆ ಕೋಪಗೊಂಡು, ಅವನಿಗೆಅಡುಗೆ ಮಾಡಲು ಯಾರೂ ಇರಲಿಲ್ಲ ಎಂಬ ಕೋಪದಿಂದ ಗಲಾಟೆ ಉಂಟಾಗಿದ್ದು ನಂತರ ಜಟ್ಟಪ್ಪ ಆಕ್ರೋಶದಿಂದ ತನ್ನ ತಾಯಿಯನ್ನು ಲಾಠಿಯಿಂದ ಹೊಡೆದುಕೊಳ್ಳಲು ಪ್ರಾರಂಭಿಸಿದರು.
ಆಘಾತದಿಂದ ದೇವಕ್ಕಮ್ಮ ತಕ್ಷಣವೇ ಮನೆಯ ಹೊರಗೆ ಓಡಲಾರಂಭಿಸಿದರು. ಆದರೆ, ಜಟ್ಟಪ್ಪ ಅವರನ್ನು ಹಿಂಬಾಲಿಸಿ ಅವರ ಮೇಲೆ ಲಾಠಿಯಿಂದ ನಿರಂತರ ಹೊಡೆದು ಕೊನೆಗೆ ಅವರನ್ನು ಹತ್ಯೆ ಮಾಡಿದರು ಎಂದು ಚಿತ್ತಾಪುರ ಉಪ ಪೊಲೀಸ್ ಅಧೀಕ್ಷಕ ಶಂಕರಗೌಡ ಪಾಟೀಲ್ ಅವರು ವರದಿ ನೀಡಿದ್ದಾರೆ. ಈ ಘಟನೆಯ ನಂತರ, ಜಟ್ಟಪ್ಪನನ್ನು ಬಂಧಿಸಿ ಅಕ್ಟೋಬರ್ 20 (ರವಿವಾರ)ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Leave feedback about this