ನಾವಿಲ್ಲದೆ ಬೆಂಗಳೂರು ಖಾಲಿ ಖಾಲಿ ಎಂದು ವಿಡಿಯೋ ಮಾಡಿ ಹರಿ ಬಿಟ್ಟ ಉತ್ತರ ಭಾರತದ ಯುವತಿಗೆ ಚಳಿ ಬಿಡಿಸಿದ ಕರವೇ ಕಾರ್ಯ ಕರ್ತ.
ಕೆಲಸಕ್ಕಾಗಿ ಬೇರೆ ರಾಜ್ಯಗಳಿಂದ ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಂಡು ಎಲ್ಲಾ ಸವಲತ್ತುಗಳನ್ನು ಅನುಭವಿಸಿ ನಂತರ ಕರ್ನಾಟಕದ ಬಗ್ಗೆಯೇ ತೀರಾ ಅಸಡ್ಡೆಯಿಂದ ಮಾತನಾಡುವವರ ಸಂಖ್ಯೆ ಹೆಚ್ಚಾಗಿದೆ. ಹೀಗಿರುವಾಗ ಇತ್ತೀಚಿಗೆ ಯುವತಿಯೊಬ್ಬಳು ನಾವಿಲ್ಲದ್ದಿದ್ದರೆ ಬೆಂಗಳೂರಿನಲ್ಲಿ ಏನೂ ಇಲ್ಲ ಎಂಬಂತೆ ಮಾತಾಡಿ ಇನ್ನೊಂದು ವಾರ್ ಶುರು ಮಾಡಿರೋದು ಸುಗಂದ್ ಶರ್ಮ ಎನ್ನುವ ಯುವತಿ. ಇದನ್ನು ಅವರು ತಮಾಷೆಯಾಗಿ ಮಾತಾಡಿದ್ದರೂ ಎಲ್ಲಾ ಕನ್ನಡಿಗರನ್ನು ಕೆರಳಿಸುವಂತಿತ್ತು.
ಅವಳು ಮಾಡಿದ ವಿಡಿಯೋ ನಲ್ಲಿ ನಾವಿಲ್ಲದ್ದಿದರೆ ಇಡೀ ಬೆಂಗಳೂರಿಗೆ ಬೆಂಗಳೂರೇ ಖಾಲಿ ಹೊಡೆಯುತ್ತೆ. ಪಿ ಜೆ ಗಳೆಲ್ಲ ಖಾಲಿ ಹೊಡೆಯುತ್ತವೆ. ಅದರಲ್ಲೂ ಕೋರಮಂಗಲದ ಪಬ್ ಬಾರ್ಗಳೆಲ್ಲ ತಂಡ ಹೊಡೆಯುತ್ತವೆ. ಹಾಗಾಗಿ ನಮ್ಮ ಬಗ್ಗೆ ಮಾತನಾಡುವಾಗ ಹುಷಾರಾಗಿ ಮಾತಾಡಿ ಎಂದು ರೀಲ್ಸ್ ನಲ್ಲಿ ಉದ್ಧಟತನದಿಂದ ವಾರ್ನಿಂಗ್ ಮಾಡಿದ ವಿಡಿಯೋ ಅದಾಗಿತ್ತು.
ಈ ರೀಲ್ಸ್ ನೋಡಿದ ಹಲವು ಕನ್ನಡಿಗರು ಕಾಮೆಂಟ್ಸ್ ಗಳ ಮೂಲಕ ಆಕ್ಷೇಪ ವ್ಯಕ್ತ ಪಡಿಸಿದ್ದರು.
ಈಗ ಈ ವಿಷಯ ಕರ್ನಾಟಕ ರಕ್ಷಣಾ ವೇದಿಕೆಯಾ ಅಧ್ಯಕ್ಷರಾದ ಟಿ ನಾರಾಯಣ ಗೌಡ ಅವರಿಗೆ ತಲುಪಿದ್ದು ಯುವತಿಗೆ ಅವರು ಖಡಕ್ ಆಗಿ ಬಿಸಿ ಮುಟ್ಟಿಸಿದ್ದಾರೆ. ಬೆಂಗಳೂರಿಗೆ ಬಂದ ಮೇಲೆ ಸುಮ್ಮನೆ ಕೆಲಸ ಮುಗಿಸಿ ಹೋಗ್ತಾ ಇರ್ಬೇಕು ಆಗದಿದ್ರೆ ಗಂಟು ಮೂಟೆ ಕಟ್ಟಿಕೊಂಡು ನಿಮ್ಮೂರಿಗೆ ಹೊರಡಬೇಕು ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಇದೊರೊಂದಿಗೆ ಸ್ಯಾಂಡಲ್ ವುಡ್ ನ ಕೆಲವು ಸಿನಿ ತಾರೆಯರು ಈ ಯುವತಿಗೆ ತೀಕ್ಷ್ಣವಾಗಿ ಉತ್ತರಿಸಿ ಟ್ಯಾಗ್ ಮಾಡಿದ್ದಾರೆ. ಇವರಲ್ಲಿ ಚಂದನ್ ಶೆಟ್ಟಿ, ನಟಿ ಚೈತ್ರ ಟಾಲಿ ವುಡ್ ನಟಿ ವರ್ಷ ಬೊಳ್ಳಮ್ಮ ಕೂಡ ಆದಷ್ಟು ಬೇಗ ಇಲ್ಲಿಂದ ಹೊರಡಿ ನೀವೆಲ್ಲ ಹೊರತು ಬೆಂಗಳೂರು ಶಾಂತವಾಗಿದ್ದರೆ ಅದೇ ಚೆನ್ನ ಎಂದು ಉತ್ತರಿಸಿದ್ದಾರೆ.
ಇದೆಲ್ಲ ಹೆಚ್ಚಾಗುತ್ತಿದ್ದಂತೆ ಯುವತಿ ಇನ್ನೊಂದು ವಿಡಿಯೋ ಹರಿಯಬಿಟ್ಟು ಈ ಲವ್ ಯು ಬೆಂಗಳೂರು, ನಾನು ತಮಾಷೆಗೆ ಮಾಡಿದ ವಿಡಿಯೋ ಗೆ ತಪ್ಪಾಗಿ ಅರ್ಥೈಸಬಾರದು ಎಂದೆಲ್ಲ ಸಮಜಾಯಿಸಿ ಕೊಡುವ ಪ್ರಯತ್ನ ಮಾಡಿದ್ದಾರೆ. ಈ ತರ ವಿವಸ್ ಗೆ ಅಥವಾ ಕಾಮೆಂಟ್ಸ್ ಗಿಟ್ಟಿಸಲು, ಬಿಟ್ಟಿ ಪ್ರಚಾರ ಪಡೆದು ರಾತ್ರೋ ರಾತ್ರಿ ಫೇಮಸ್ ಆಗಲು ಬೆಂಗಳೂರಿನ ಹೆಸರನ್ನು ಬಳಸಿ ಆಟ ಆಡುವ ಈ ಬೇರೆ ರಾಜ್ಯದ ನಾಗರಿಕರಿಗೆ ಮೊದಲು ತಾವು ದುಡಿದು ತಿನ್ನಲು ಹೊಟ್ಟೆ ಹೊರಲು ಬಂದಿರುವ ರಾಜ್ಯಕ್ಕೆ ಹೇಗೆ ಮರ್ಯಾದೆ ಕೊಡಬೇಕು ಅನ್ನೋದನ್ನ ಕಲಿಸುವ ಪಾಠ ಅಗತ್ಯವಿದೆ.
Leave feedback about this