wowstava Blog LATEST WITH HUB STATE NEWS ನಾಲ್ಕು ಕೊಲೆಗೈದ ನಿಜ್ಜಾರು ಆರೋಪಿಯಿಂದ ಜೈಲಿನಲ್ಲಿ ಉಪವಾಸ ಮುಷ್ಕರ
LATEST WITH HUB STATE NEWS

ನಾಲ್ಕು ಕೊಲೆಗೈದ ನಿಜ್ಜಾರು ಆರೋಪಿಯಿಂದ ಜೈಲಿನಲ್ಲಿ ಉಪವಾಸ ಮುಷ್ಕರ

ಉಡುಪಿ: ಕಳೆದ ವರ್ಷದ ದೀಪಾವಳಿ ಸಮಯದಲ್ಲಿ ನೇಜಾರಿನ ಒಂದೇ ಕುಟುಂಬದ ನಾಲ್ವರು ಮಂದಿ ಧಾರುಣವಾಗಿ ಕೊಲೆಗೈದ ಪ್ರಕರಣದ ಆರೋಪಿ ಅರುಣ್ ಚೌಗಲೆ ಇದೀಗ ಜೈಲಿನಲ್ಲಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾನೆ. ಈ ಪ್ರಕರಣದಲ್ಲಿ ಆರೋಪಿಯಾಗಿ ಬಂಧಿತನಾದ ಅರುಣ್ ಈಗ ಜೈಲಿನಲ್ಲಿ ಉಪವಾಸ ಸತ್ಯಾಗ್ರಹವನ್ನು ಮಾಡಿ ತನ್ನ ಬೇಡಿಕೆಯನ್ನು ಮುಂದಿಟ್ಟಿದ್ದಾನೆ. ಆತನ ಬೇಡಿಕೆ ಏನೆಂದರೆ, ತನ್ನನ್ನು ಪ್ರತ್ಯೇಕ (ಒಂಟಿ) ಸೆಲ್‌ನಿಂದ ಜನರಲ್ ಸೆಲ್‌ಗೆ ವರ್ಗಾಯಿಸಬೇಕು ಎಂಬುದು.

ನೆನ್ನೆಯಿಂದ, ಅರುಣ್ ಚೌಗಲೆ ನೀರು ಸಹ ಸೇವಿಸದೇ ಉಪವಾಸ ಶುರು ಮಾಡಿದ್ದಾನೆ. ಆತನು ಆಹಾರ ಮತ್ತು ನೀರನ್ನು ತ್ಯಜಿಸಿ ಉಪವಾಸ ಕುಳಿತಿದ್ದಾನೆ,ಸದ್ಯ ಈ ಆರೋಪಿಗೆ ಜೀವ ಬೆದರಿಕೆ ಇದ್ದು ಅವನ ಸುರಕ್ಷತೆಗೆ ಒಂಟಿ ಸೆಲ್ ನಲ್ಲೇ ಇರಿಸಲಾಗಿತ್ತು. ಸದ್ಯ ಈ ಆರೋಪಿ ಅರುಣ್ ಚೌಗಲೆ ಬೆಂಗಳೂರು ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿದ್ದಾನೆ.

2023ರ ನವೆಂಬರ್ 12 ರಂದು ಉಡುಪಿಯ ನೆಜಾರ್ ಬಳಿ, ಅರುಣ್ ಚೌಗಲೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಉದ್ಯೋಗಿಯಾಗಿದ್ದಾಗ,  ತನ್ನೊಡನೆ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಯ ಮನೆಗೆ ಎಕಾ ಏಕಿ ನುಗ್ಗಿ ಮಕ್ಕಳು ದೊಡ್ಡವರು ಎನ್ನದೆ ದಾಳಿ ಮಾಡಿ ನಾಲ್ಕು ಜನರ ಜೀವ ಬಳಿ ಪಡೆದು ಪರಾರಿಯಾಗಿದ್ದ. ಹಸೀನಾ (48), ಆಫ್ಸಾನ್ (23), ಆಸಿಮ್ (12) ಮತ್ತು ಆಯ್ನಾಜ್ (21) ಎಂಬ ನಾಲ್ವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ.

ಈ ಘಟನೆಯಾದಾಗ, ಹಸೀನಾ ಅವರ ಅತ್ತೆಗೆ ದಾಳಿ ಮಾಡಿದ್ದು ಅವರು ಬಾತ್ರೂಮ್‌ಗೆ ಓಡಿ ಬಚಾವಾಗಿದ್ದರು. ಸದ್ಯ, ಅರುಣ್ ಈಗ ಪರಪ್ಪನ ಅಗ್ರಹಾರ ಜೈಲಿನ ಪ್ರತ್ಯೇಕ ಸೆಲ್‌ನಲ್ಲಿ ಇದ್ದಾನೆ, ಮತ್ತು ತನ್ನನ್ನು ಬೇರೆ ಸೆಲ್‌ಗೆ ವರ್ಗಾಯಿಸಲು ಮತ್ತು ಪ್ರಕರಣವನ್ನು ಬೆಂಗಳೂರಿನ ಕೋರ್ಟ್‌ಗೆ ವರ್ಗಾಯಿಸಲು ಆಗ್ರಹಿಸುತ್ತಿದ್ದಾನೆ.

ಜೈಲಿನ ಅಧಿಕಾರಿಗಳು, ಆರೋಪಿ ಅರುಣ್ ಗೆ  ಪ್ರತ್ಯೇಕ ಸೆಲ್ ಅಗತ್ಯವಿದೆ ಎಂದು ಹೇಳಿದ್ದು, ಅರುಣ್‌ನಿಗೆ ಜೀವ ಬೆದರಿಕೆ ಇರುವುದರಿಂದ, ಅವರನ್ನು ಉಡುಪಿಯಿಂದ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ.

Exit mobile version